ತುಂಗಾಕಿರಣ ಸುದ್ದಿ
ಕುಷ್ಟಗಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಯಂಕಮ್ಮ ಹನುಮಪ್ಪ ಇವರಿಗೆ 1000/- ಮಾಶಾಸದ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟೆಸ್ಟ್ ಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಆಶೀರ್ವಾದದಿಂದ ಯಂಕಮ್ಮ ಹನುಮಸಾಗರ ಇವರಿಗೆ ಒಂದು ಸಾವಿರ ರೂ. ಗಳ ಮಾಶಾಸನ ಮಂಜೂರಾತಿಯಾಗಿದ್ದು ಇಂದು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮವ್ವ ಶಿವನಪ್ಪ ಕಂದಗಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕುಷ್ಟಗಿ ತಾಲೂಕಿನ ಯೋಜನಾಧಿಕಾರಿಗಳಾದ ಶೇಖರ್ ನಾಯ್ಕ್ ಮತ್ತು ಖಾದರ್ ಸಾಬ್ ಬಾಣದಾರು, ಮೃತ್ಯುಸಾಬ್ ಗಿರಣಿ, ಒಕ್ಕೂಟದ ಅಧ್ಯಕ್ಷರಾದ ಶಂಕ್ರಮ್ಮ ಚಂದಪ್ಪ ಶಾಸ್ತ್ರಿ, ಲಕ್ಷ್ಮೀಬಾಯಿ, ಈರಪ್ಪ ಪತ್ತಾರ್, ನೋಡಲ್ ಅಧಿಕಾರಿ ತಾಲೂಕಿನ ಸಮನ್ವಯ ಅಧಿಕಾರಿ ಸೇವಾ ಪ್ರತಿನಿಧಿ ನಾಗರಾಜ ಕಂದಗಲ್ಲ ಇವರ ಉಪಸ್ಥಿತಿಯಲ್ಲಿ ಮಾಸಾಸನದ ಮಂಜೂರಾತಿ ಪತ್ರವನ್ನು ಯಂಕಮ್ಮ ಇವರಿಗೆ ವಿತರಣೆ ಮಾಡಲಾಯಿತು.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.







