ಬಳ್ಳಾರಿ ಜುಲೈ 14. ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಉಪಾರ ಹೋಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ಸುವರ್ಣ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
19 ರಲ್ಲಿ 11 ಮತಗಳಿಂದ ಗೆಲುವು ಸಾಧಿಸಿದರು. ಮಾಜಿ ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ ಅವರು ಮತ್ತು ಸಿರುಗುಪ್ಪ ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ, ಹಿರಿಯರಾದ ರುದ್ರಗೌಡ, ಎಪಿಎಂಸಿ ಮಾಜಿಅಧ್ಯಾಕ್ಷರಾದ ಶರಣಬಸವ, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಯಾದ ಶರಣಬಸನಗೌಡ, ಹಿರಿಯ ಮುಖಂಡರಾದ ಧರ್ಮವೀರ ಮಲ್ಲಯ್ಯ, ಹನುಮಂತಪ್ಪ, ಕೋಮಾರಪ್ಪ ,ಶರಣಬಸವ, ವೆಂಕಟೇಶ್ ಗೌಡ ,ನೀಲಕಂಠ, ನಾಗರಾಜ, ಮುದುಕಪ್ಪ ,ಜಡೇಶ, ದೇವೇಂದ್ರ, ಮಾಕಪ್ಪ, ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.







