ಬಳ್ಳಾರಿ ಆ 22. ಸಮರ್ಥವಾಣಿ ಮತ್ತು ದೆಹಲಿವಾರ್ತೆ ಕನ್ನಡ ದಿನ ಪತ್ರಿಕೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾ ಹಿರಿಯ ವರದಿಗಾರರಾದ ಪಂಪನಗೌಡನವರ ತಾಯಿ ಬಿ.ಗಂಗಮ್ಮ (89) ಅವರು ಶ್ರಾವಣ ಶುಕ್ರವಾರ ದಿನಾಂಕ 22/08/25 ರಂದು ರಾತ್ರಿ 10:24 ಕ್ಕೆ ದೈವಾಧೀನರಾಗಿದ್ದಾರೆ.
ಬಿ.ಪಂಪನಗೌಡ ಸೇರಿದಂತೆ ಆರು ಜನ ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಏಳು ಜನ ಮಕ್ಕಳು,ಸೊಸೆಯಂದಿಯರು,ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರು ವಯೋಸಹಜ ಅನಾರೋಗ್ಯದ ನಿಮಿತ್ತ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶನಿವಾರ ಮದ್ಯಾಹ್ನ 2 ಗಂಟೆಗೆ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.







